ರೈಲಿನಲ್ಲಿ ಬಂದಿಳಿದರು:ವಾಪಸ್ ಗದಗ ಜಿಲ್ಲೆ ಹೊಳೆಆಲೂರಿಗೆ ಮರಳಿದ ತಂಡ, ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೈಲ ಸಾಗಣೆ ಮಾಡುತ್ತಿದ್ದ ಗೂಡ್ಸ್ ರೈಲು ಹತ್ತಿ ಗಾರ್ಡ್ ಬೋಗಿಯಲ್ಲಿ ಕುಳಿತು ಮಧ್ಯಾಹ್ನ ಬಾಗಲಕೋಟೆಗೆ ಬಂದಿಳಿಯಿತು. ನಿಗದಿಯಂತೆ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಮಹಾತ್ಮಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಿಲ್ಲೆಯಲ್ಲಿ ಅಧ್ಯಯನ ಪ್ರವಾಸ ಆರಂಭಿಸಬೇಕಿತ್ತು. ಈ ತಂಡದಲ್ಲಿ ಶಾಸಕರಾದ ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಇದ್ದಾರೆ.