‘ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ವರ್ಷಾಚರಣೆ ಪ್ರಯುಕ್ತ, ಈ ಬಾರಿ ನಾಟಕೋತ್ಸವ ಕ್ಕೆ ‘ಗಾಂಧಿ ಪಥ’ ಎಂಬ ವಿಷಯ ಆಯ್ಕೆ ಮಾಡಿಕೊಳ್ಳಲಾಗಿದೆ. ‘ಗಾಂಧಿ ಅವರ ಸತ್ಯ, ಆಧುನಿಕ ರಂಗಭೂಮಿ ಪರಂಪರೆಗೆ ದಕ್ಕಬೇಕು ಎಂಬುದು ಇದರ ಉದ್ದೇಶ’ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.