ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲ್ ಟನ್ ರೆಸಾರ್ಟಿನಿಂದ ತೆರಳಿದ ಬಳ್ಳಾರಿ ಶಾಸಕರು

Last Updated 19 ಜನವರಿ 2019, 10:48 IST
ಅಕ್ಷರ ಗಾತ್ರ

ರಾಮನಗರ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.‌ ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಸಚಿವರು ಹಾಗೂ ಶಾಸಕರು ಶನಿವಾರ ಮಧ್ಯಾಹ್ನ ರೆಸಾರ್ಟಿನಿಂದ ವಿಧಾನಸೌಧಕ್ಕೆ ತೆರಳಿದರು.

‘ಬಳ್ಳಾರಿ‌ ಜಿಲ್ಲಾ ಮಿನರಲ್ ಫಂಡ್ ಬಳಕೆ ಕುರಿತು ವಿಧಾನಸೌಧದ ಕೊಠಡಿ‌ ಸಂಖ್ಯೆ 106ರಲ್ಲಿ ಸಭೆ ನಿಗದಿಯಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಅನುದಾನ ಬಳಕೆ ಬಗ್ಗೆ ಚರ್ಚಿಸಿ ಅಂತಿಮಗೊಳಿಸಬೇಕಿದೆ. ಹೀಗಾಗಿ ಮೂವರು ಸಚಿವರು ಹಾಗೂ ಬಳ್ಳಾರಿ ಜಿಲ್ಲೆಯ ಶಾಸಕರು ಸಭೆಗೆ ತೆರಳುತ್ತಿದ್ದೇವೆ. ಸಭೆ ಬಳಿಕ ರೆಸಾರ್ಟ್ ಗೆ ವಾಪಸ್ ಆಗುತ್ತೇವೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.‌

ಸಚಿವರಾದ ಪರಮೇಶ್ವರ ನಾಯಕ್, ಈ. ತುಕರಾಂ, ಶಾಸಕ ಆನಂದ ಸಿಂಗ್ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT