ಯುವಪೀಳಿಗೆಗೆ ದೇಶದಲ್ಲಿ ಪ್ರಚಲಿತವಿರುವ ವಿವಿಧ ಸೈದ್ಧಾಂತಿಕ ವಾದಗಳನ್ನು ಪರಿಚಯಿಸಿ, ಚರ್ಚಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಅಂಬೇಡ್ಕರ್ ವಾದ, ಗಾಂಧಿವಾದ, ಮಾರ್ಕ್ಸ್ವಾದ, ಲೋಹಿಯಾವಾದ, ಸ್ತ್ರೀವಾದ ಮತ್ತು ವಿಚಾರವಾದಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆಯಾಗಲಿವೆ. ಈ ವಾದಗಳ ಪರಸ್ಪರ ಅನುಸಂಧಾನದ ಅಗತ್ಯವನ್ನು ಈ ಕಾರ್ಯಾಗಾರದಲ್ಲಿ ಮನವರಿಕೆ ಮಾಡಿಕೊಡುವ ಆಶಯ ಕಾರ್ಯಾಗಾರದ್ದು.