ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ‘ಸಾಣೇಹಳ್ಳಿ ಸ್ವಾಮೀಜಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ಚಿತ್ರದುರ್ಗ, ಸಿರಿಗೆರೆ, ಉಳವಿ, ಕೂಡಲಸಂಗಮ, ಗದುಗಿನ ಮಠ ಸೇರಿ ರಾಜ್ಯದ ಯಾವುದೇ ಲಿಂಗಾಯತ ಮಠಕ್ಕೆ ಪೇಜಾವರ ಸ್ವಾಮೀಜಿ ಬಂದು ಲಿಂಗಾಯತ ಧರ್ಮದ ಬಗ್ಗೆ ತಿಳಿದುಕೊಳ್ಳಲಿ’ ಎಂದು ಹೇಳಿದರು.