ಹೊರಟ್ಟಿ ಹೇಳಿಕೆಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಸಚಿವ ದೇಶಪಾಂಡೆ, ‘ಹೊರಟ್ಟಿ ವಿರುದ್ಧ ಚುನಾವಣೆಗೆ ನಿಲ್ಲುವ ಪರಿಸ್ಥಿತಿ ಎದುರಾದರೆ ನೋಡುತ್ತೇನೆ. ಅಂತಹ ಪರಿಸ್ಥಿತಿ ಇನ್ನೂ ಎದುರಾಗಿಲ್ಲ. ಹಾಗೆ ಒಂದು ವೇಳೆ ಸ್ಪರ್ಧಿಸುವುದಾದರೆ ನಾನು ಎಂಎಲ್ಸಿ ಸ್ಥಾನಕ್ಕೆ ನಿಲ್ಲಬೇಕು. ಇಲ್ಲವೇ ಹೊರಟ್ಟಿ ಎಂಎಲ್ಎ ಚುನಾವಣೆಗೆ ನಿಲ್ಲಬೇಕು ಅಂದಾಗ ಮಾತ್ರ ಅದು ಸಾಧ್ಯ’ ಎಂದು ಕುಟುಕಿದರು.