ವಿಜಯ ವಿಠಲ ದೇವಸ್ಥಾನದಿಂದ ಮರಳುವ ವೇಳೆ ಈ ಘಟನೆ ನಡೆದಿದೆ. ಗಾಯಗೊಂಡವರೆಲ್ಲ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಆರ್.ಎಸ್. ಕೊಂಡಪುರ ಗ್ರಾಮದವರು. ನಾಲ್ಕು ವರ್ಷದ ಬಾಲಕಿ ರಿತಿಕಾ ರೆಡ್ಡಿ, ರಾಮಾಂಜಿನಮ್ಮ, ಅರುಣ, ಲಕ್ಷ್ಮಿದೇವಿ, ಶಾರದಾ ಹಾಗೂ ವಾಹನದ ಚಾಲಕಿ ಭಾಗ್ಯಲಕ್ಷ್ಮಿ ಗಾಯಗೊಂಡಿದ್ದಾರೆ. ಅವರಿಗೆ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.