‘ನಾನು ಎಲ್ಲಿಗೂ ಹೋಗಿಲ್ಲ. ಅಸಮಾಧಾನಗೊಂಡಿದ್ದ ಕಾರಣ ಮನೆಯಲ್ಲಿಯೇ ಇದ್ದೆ. ಸೋಮವಾರದಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ. ಈ ಹಿಂದೆ, ‘ಆಪರೇಷನ್ ಕಮಲ’ದ ಪ್ರಯತ್ನಗಳ ಬಗ್ಗೆ ಬಹಿರಂಗಗೊಳಿಸಿದವನು ನಾನೇ. ಆದರೆ, ಯಾರೋ ಏನೋ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಹಿರೇಕೆರೂರ ತಾಲ್ಲೂಕಿನ ಸಾತೇನಹಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.