ಕನಕಪುರ: ಬೆಳಗಿನ ಜಾವ ಪಕ್ಕದ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ರೈತನ ಮೇಲೆ ಎರಡು ಕರಡಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿವೆ. ಕೆರೆಮೇಗಳದೊಡ್ಡಿ ಗ್ರಾಮದ ರಾಮಕೃಷ್ಣ (55) ಕರಡಿ ದಾಳಿಗೆ ತುತ್ತಾದ ರೈತ.
ಅಳ್ಳಿಮಾರನಹಳ್ಳಿ ಬಳಿ ಕರಡಿಗಳು ದಾಳಿ ನಡೆಸಿವೆ. ಅದೇ ರಸ್ತೆ ಮಾರ್ಗವಾಗಿ ಬಂದ ಬೈಕ್ ಸವಾರರೊಬ್ಬರು ಗಾಯಗೊಂಡ ರೈತನನ್ನು ಕನಕಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.