ತುಮಕೂರು: ತೋವಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಮೀನಿಗಳಲ್ಲಿ ಕೆಲಸ ಮಾಡುತ್ತಿದ್ದಇಬ್ಬರ ಮೇಲೆ ಮಂಗಳವಾರ ಬೆಳಿಗ್ಗೆ ಕರಡಿ ದಾಳಿ ನಡೆಸಿದೆ.
ಮೇವು ಕೊಯ್ಯುತ್ತಿದ್ದ ಬೋರಯ್ಯನ ಹಟ್ಟಿಯ ಸಣ್ಣಪ್ಪ ಅವರ ಕೈ ಕಚ್ಚಿದೆ. ಪಕ್ಕದ ಜಮೀನಿನಲ್ಲಿ ಹೂವು ಬಿಡಿಸುತ್ತಿದ್ದ ಸುಮಂಗಲಮ್ಮ ಅವರ ಮೇಲೂ ದಾಳಿಗೆ ಮುಂದಾಗಿದೆ. ಸುಮಂಗಲಮ್ಮ ಓಡಲು ಮುಂದಾಗಿ ಜಾರಿ ಬಿದಿದ್ದಾರೆ. ಕರಡಿ ಅವರನ್ನು ಪರಚಿದೆ.
ಜನರು ಕರಡಿ ನೋಡಿ ಚೀರಾಡಿದ್ದಾರೆ. ಕರಡಿ ಅಲ್ಲಿಂದ ಕಾಲ್ಕಿತ್ತಿದೆ.