‘ನಾವು ಕಷ್ಟಪಟ್ಟು ಬಿಇಡಿ ತರಬೇತಿ ಮಾಡಿ, ಟಿಇಟಿಯಲ್ಲಿ ಅರ್ಹತೆ ಹೊಂದಿದ್ದರೂ ಸರ್ಕಾರಿ ಶಿಕ್ಷಕರಾಗಿ ನೇಮಕಗೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಲು ಪದವಿಯಲ್ಲಿ ಪಿಸಿಎಂ ಕಲಿತಿರಲೇಬೇಕು ಮತ್ತು ಐಚ್ಛಿಕ ವಿಷಯಗಳಲ್ಲಿ ಕನಿಷ್ಟ ಶೇ 50 ರಷ್ಟು ಅಂಕ ಪಡೆದಿರಲೇಬೇಕು. ಪಿಎಂಸಿಎಸ್, ಪಿಎಂಇ, ಸಿಬಿಝಡ್, ಪಿಎಂಎಸ್ ಮಾಡಿದವರಿಗೆ ಅವಕಾಶವಿಲ್ಲ. ಇದು ಅನ್ಯಾಯದಿಂದ ಕೂಡಿದ ನೀತಿ’ ಎಂದು ಅವರು ಹೇಳಿದ್ದಾರೆ.