ಬೆಳಗಾವಿ: ಬಾಗಲಕೋಟೆ ಹಾಗೂಬೆಳಗಾವಿ ಜಿಲ್ಲೆಯ ವಿವಿಧೆಡೆ ಪ್ರವಾಹದಿಂದಾಗಿ ನಡುಗಡ್ಡೆಯಾಗಿದ್ದ ಪ್ರದೇಶಗಳಲ್ಲಿ ಸಿಲುಕಿದ್ದ 44 ಮಂದಿಯನ್ನು ಸೇನೆಯ ಮೂರು ಹೆಲಿಕಾಪ್ಟರಗಳನ್ನು ಬಳಸಿ ರಕ್ಷಣೆ ಮಾಡಲಾಯಿತು.
ಗೋಕಾಕ ತಾಲೂಕಿನ ಉದಿಗಟ್ಟಿಯಲ್ಲಿದ್ದ 7 ಜನರನ್ನು ರಕ್ಷಿಸಲಾಗಿದೆ. ವಿವಿಧೆಡೆ 320 ಆಹಾರದ ಪೊಟ್ಟಣಗಳನ್ನು ಹಾಕಲಾಗಿದೆ. ರಾಮದುರ್ಗ ತಾಲ್ಲೂಕಿನ ಹಾಲೊಳ್ಳಿಯಲ್ಲಿ 18, ಮುಧೋಳದ ಗಿರ್ದಾಳದಿಂ ಒಬ್ಬರು, ರೋಣಿಯಲ್ಲಿದ್ದ 6 ಜನರನ್ನು ರಕ್ಷಿಸಲಾಗಿದೆ.
ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಹಾಲೊಳ್ಳಿಯ ಮೂವರು ಹಾಗೂ ರೂಗಿ ಮತ್ತು ಚನ್ನಾಳದ 10 ಜನರನ್ನು ರಕ್ಷಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.