ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಹೆಲಿಕಾಪ್ಟರ್ ಕಾರ್ಯಾಚರಣೆ; ನಡುಗಡ್ಡೆಯಲ್ಲಿದ್ದ 44 ಸಂತ್ರಸ್ತರ ರಕ್ಷಣೆ

Last Updated 9 ಆಗಸ್ಟ್ 2019, 6:21 IST
ಅಕ್ಷರ ಗಾತ್ರ

ಬೆಳಗಾವಿ: ಬಾಗಲಕೋಟೆ ಹಾಗೂಬೆಳಗಾವಿ ಜಿಲ್ಲೆಯ ವಿವಿಧೆಡೆ ಪ್ರವಾಹದಿಂದಾಗಿ ನಡುಗಡ್ಡೆಯಾಗಿದ್ದ ಪ್ರದೇಶಗಳಲ್ಲಿ ಸಿಲುಕಿದ್ದ 44 ಮಂದಿಯನ್ನು ಸೇನೆಯ ಮೂರು ಹೆಲಿಕಾಪ್ಟರಗಳನ್ನು ಬಳಸಿ ರಕ್ಷಣೆ ಮಾಡಲಾಯಿತು.

ಗೋಕಾಕ ತಾಲೂಕಿನ ಉದಿಗಟ್ಟಿಯಲ್ಲಿದ್ದ 7 ಜನರನ್ನು ರಕ್ಷಿಸಲಾಗಿದೆ. ವಿವಿಧೆಡೆ 320 ಆಹಾರದ ಪೊಟ್ಟಣಗಳನ್ನು ಹಾಕಲಾಗಿದೆ. ರಾಮದುರ್ಗ ತಾಲ್ಲೂಕಿನ ಹಾಲೊಳ್ಳಿಯಲ್ಲಿ 18, ಮುಧೋಳದ ಗಿರ್ದಾಳದಿಂ ಒಬ್ಬರು, ರೋಣಿಯಲ್ಲಿದ್ದ 6 ಜನರನ್ನು ರಕ್ಷಿಸಲಾಗಿದೆ.

ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಹಾಲೊಳ್ಳಿಯ ಮೂವರು ಹಾಗೂ ರೂಗಿ ಮತ್ತು ಚನ್ನಾಳದ 10 ಜನರನ್ನು ರಕ್ಷಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT