ಪ್ರತಿಕ್ರಿಯಿಸುವ ದಾಸ್ತಿಕೊಪ್ಪ, ‘ಚಿಕಿತ್ಸೆ ನೀಡುವವರ ಹೆಸರುಗಳನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಹೆಸರು ಹೇಳದಂತೆ ನಾವೇ ಅವರಿಗೆ ಸೂಚನೆ ಕೊಟ್ಟಿದ್ದೇವೆ. ಅಲ್ಲದೇ ಅರ್ಹರಲ್ಲದವರನ್ನು ಚಿಕಿತ್ಸೆಗೆ ನಿಯೋಜಿಸಿಲ್ಲ. ಗಂಟಲು ದ್ರವದ ಮಾದರಿಯ ಪರೀಕ್ಷಾ ವರದಿ ನೆಗೆಟಿವ್ ಬಂದರೆ ಮಾತ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಅಲ್ಲಿವರೆಗೆ ಚಿಕಿತ್ಸೆ ಮುಂದುವರಿಸಲಾಗುತ್ತದೆ. ಇಂಟರ್ನಿಗಳು ಗಂಟಲು ದ್ರವದ ಮಾದರಿ ಸಂಗ್ರಹಿಸುತ್ತಿಲ್ಲ. ಈ ಪ್ರಕ್ರಿಯೆಯಲ್ಲಿ ಅವರು ಸಹಕಾರವನ್ನಷ್ಟೆ ನೀಡುತ್ತಾರೆ. ಇಎನ್ಟಿ ವಿಭಾಗದ ತಜ್ಞರು ಮಾದರಿ ಸಂಗ್ರಹಿಸುತ್ತಾರೆ’ ಎಂದು ತಿಳಿಸುವುದು ವಿಡಿಯೊದಲ್ಲಿದೆ.