‘ಎರಡು ದಿನಗಳ ಹಿಂದೆ ಶಾಸಕರಾದ ಭೀಮಾ ನಾಯ್ಕ, ಜೆ.ಎನ್. ಗಣೇಶ್ ನನ್ನ ಸಂಪರ್ಕದಲ್ಲಿ ಇದ್ದರು. ಆದರೆ, ಅದಾದ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಶಾಸಕ ಬಿ. ನಾಗೇಂದ್ರ ಅವರ ಮೊಬೈಲ್ ಯಥಾರೀತಿಯಂತೆ ಸ್ವಿಚ್ ಆಫ್ ಆಗಿದೆ. ಆದರೆ, ಯಾರು ಪಕ್ಷ ಬಿಡುವುದಿಲ್ಲ. ಸಂಕ್ರಾಂತಿ ಹಬ್ಬದ ನಿಮಿತ್ತ ನನ್ನಂತೆ ಅವರು ಕೂಡ ಎಲ್ಲಿಗಾದರೂ ದೇವರ ದರ್ಶನಕ್ಕೆ ಹೋಗಿರಬಹುದು’ ಎಂದು ಹೇಳಿದರು.