‘ನಾವು ಸಣ್ಣ ಹಿಡುವಳಿದಾರರು. ವೀಳ್ಯದೆಲೆಯೇ ನಮಗೆ ಜೀವನಾಧಾರ. ತಿಂಗಳಿಂದಲೂ ಎಲೆಯನ್ನು ಕೊಯ್ದಿಲ್ಲ. ನಯಾಪೈಸೆಯೂ ಸಿಕ್ಕಿಲ್ಲ. ಕೂಲಿಯನ್ನು ಕೊಡಲಾಗದೇ ಮನೆ ಮಂದಿಯೇ ಎಲೆ ಕೊಯ್ಯಲು ಮುಂದಾದರೂ, ಕೇಳೋರಿಲ್ಲ. ಯಾರ ಮುಂದೆ ಸಂಕಟ ಹೇಳುವುದು?’ ಎಂದು ಬೆಳೆಗಾರರಾದ ರೇವಣ್ಣ, ಚೌಡಯ್ಯ, ಕೆಂಪಚೌಡ, ಹೇಮಾವತಿ, ಕೆಂಪದೇವಮ್ಮ, ಸಿಳ್ಳಪ್ಪ, ಪುರುಷೋತ್ತಮ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.