ಉಡುಪಿ: ಕುಂದಾಪುರ ತಾಲ್ಲೂಕಿನ ಗುಜ್ಜಾಡಿಯಲ್ಲಿ ಮಂಗಳವಾರ ಬಂದ್ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಮುಚ್ಚಿಸಲು ಬಂದ ಪ್ರತಿಭಟನಾಕರರನ್ನು ಅಂಗಡಿ ಮಾಲೀಕರೊಬ್ಬರು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.
‘ಸಾವಿರಾರು ವರ್ಷಗಳ ಇತಿಹಾಸ ಇರುವ ಶಬರಿಮಲೆಗೆ ಮುಖ್ಯಮಂತ್ರಿಯೊಬ್ಬರು ಗಲೀಜು ತಿಂದು ಹೋದಾಗ ಕಮ್ಯುನಿಸ್ಟರು ಪ್ರತಿಭಟನೆ ಮಾಡುವುದಿಲ್ಲ. ಒಳ್ಳೆಯ ಪ್ರಧಾನಿ ವಿರುದ್ಧ ಪ್ರತಿಭಟನೆ ಮಾಡುತ್ತೀರಾ’ ಎಂದು ಪ್ರಶ್ನಿಸಿದ್ದಾರೆ.
‘ಮೊದಲು ದೇಶದ ಬಗ್ಗೆ ಚಿಂತನೆ ಮಾಡಿ, ನರೇಂದ್ರ ಮೋದಿ ಸರ್ಕಾರ ಎಷ್ಟೊಂದು ಸವಲತ್ತುಗಳನ್ನು ಕೊಟ್ಟಿದೆ. ದೇಶಕ್ಕೆ ಮೋದಿ ಅವರಂಥ ಪ್ರಧಾನಿ ಸಿಗುವುದು ಪುಣ್ಯ. ನಾನು ಮೋದಿ ಭಕ್ತ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಕಮ್ಯುನಿಸ್ಟರಿಗೆ ಬೆಂಬಲ ನೀಡುವುದಿಲ್ಲ ಎಂದು ಹರಿಹಾಯ್ದಿದ್ದಾರೆ.