ಬೆಂಗಳೂರು: 'ನ್ಯಾಯಮೂರ್ತಿಗೆ ರಕ್ಷಣೆ ಕೊಡದ ಸರ್ಕಾರ ಜನಸಾಮಾನ್ಯರಿಗೇನು ಕೊಟ್ಟೀತು, ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿದಿದೆಯೆಂದು ಊಹಿಸಿ..' ಎಂದು ಕೇಂದ್ರ ಸಚಿವ ಸದಾನಂದ ಗೌಡ ಟ್ವೀಟಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತರಾದ ನ್ಯಾ.ವಿಶ್ವನಾಥ ಶೆಟ್ಟಿ ಅವರಿಗೆ ವ್ಯಕ್ತಿಯೊಬ್ಬ ಅವರದ್ದೇ ಕಚೇರಿಯಲ್ಲಿ ಚಾಕೂವಿನಿಂದ ಇರಿದ್ದಿದ್ದಾನೆಂದರೆ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಕುಸಿದಿದೆ ಎಂದು ಊಹಿಸಿ ಎಂದಿರುವ ಸದಾನಂದ ಗೌಡ ಅವರು ತಕ್ಷಣವೇ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತರಾದ ಶ್ರೀ ವಿಶ್ವನಾಥ ಶೆಟ್ಟಿಯವರಿಗೆ ಆರೋಪಿಯೊಬ್ಬಅವರದ್ದೇ ಕಚೇರಿಯಲ್ಲಿಚಾಕೂವಿನಿಂದ ಇರಿದ್ದಿದ್ದಾನೆಂದರೆ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಕುಸಿದಿದೆಯೆಂದು ಊಹಿಸಿ ನ್ಯಾಯಮೂರ್ತಿಗೆರಕ್ಷಣೆ ಕೊಡದ ಸರಕಾರ ಜನಸಾಮಾನ್ಯರಿಗೇನು ಕೊಟ್ಟೀತು ?ಗೃಹ ಮಂತ್ರಿಗಳಿಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ತತ್ ಕ್ಷಣ ರಾಜೀನಾಮೆ ಕೊಡಲಿ