ಬೆಂಗಳೂರು: ‘ಬಿದಾಯಿ’ ಯೋಜನೆ ಫಲಾನುಭವಿಗಳಿಗೆ ಸಕಾಲದಲ್ಲಿ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಈವರೆಗೆ ಒಟ್ಟು ₹142.70 ಕೋಟಿ ಬಾಕಿ ಉಳಿಸಿಕೊಂಡಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾಹಿತಿ ಹಕ್ಕಿನಡಿ ಈ ವಿವರ ಪಡೆದುಕೊಂಡಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಅಲ್ಪ ಸಂಖ್ಯಾತ ಸಮುದಾಯದ (ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್, ಪಾರ್ಸಿ) ಮಹಿಳೆಯರ ವಿವಾಹ ಸಂದರ್ಭದಲ್ಲಿ ಬಿದಾಯಿ ಯೋಜನೆಯಡಿ ₹50 ಸಾವಿರ ಧನ ಸಹಾಯ ನೀಡಲಾಗುತ್ತಿದೆ.
ಬಿಪಿಎಲ್ ಕುಟುಂಬದ ಯುವತಿ, ವಿಧವೆಯರು, ವಿಚ್ಛೇದಿತ ಮಹಿಳೆಯರು ಯೋಜನೆ ಫಲಾನುಭವಿಗಳು.
ಧಾರವಾಡ ಜಿಲ್ಲೆಯಲ್ಲಿ ಅತಿಹೆಚ್ಚು 2,440 ಅರ್ಜಿಗಳು ಬಾಕಿ ಉಳಿದಿವೆ. ಹಾವೇರಿ ಜಿಲ್ಲೆ 2,342,ಬೀದರ್ 2,230 ಅರ್ಜಿಗಳು ಬಾಕಿ ಇವೆ.