ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜಮಾತ್‌ಗೆ ಹೋಗಿ ಬಂದ ವ್ಯಕ್ತಿಯ ಮಗಳು, ಸೋದರನ ಮಗಳಿಗೂ ಸೋಂಕು

Last Updated 13 ಏಪ್ರಿಲ್ 2020, 9:34 IST
ಅಕ್ಷರ ಗಾತ್ರ

ಬೀದರ್‌: ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ತಬ್ಲೀಗ್‌ ಜಮಾತ್ ಕೇಂದ್ರ ಕಚೇರಿಯಲ್ಲಿನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ನಗರಕ್ಕೆ ಮರಳಿರುವ ವ್ಯಕ್ತಿಯ ಮಗಳು ಹಾಗೂ ಅವರ ಸಹೋದರನ ಮಗಳಿಗೂಕೋವಿಡ್ 19 ಸೋಂಕು ದೃಢಪಟ್ಟಿದೆ.

ದೆಹಲಿಯಿಂದ ಮರಳಿದ ವ್ಯಕ್ತಿ ಮಗಳಿಗೂ ಸೋಂಕು ತಗುಲಿದೆ. ತನ್ನ ಸಹೋದರನ ಮನೆಯಲ್ಲಿ ವಾಸವಾಗಿರುವ ತಾಯಿಯನ್ನು ಭೇಟಿಯಾಗಲು ಬರುತ್ತಿದ್ದರು. ಸಹೋದರನ ಮಗಳಿಗೂ ಸೋಂಕು ತಗುಲಿದೆ. ಶನಿವಾರ ಅತ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಒಂದೇ ಪರಿವಾರದ ನಾಲ್ವರಿಗೆ ಸೋಂಕು ತಗುಲಿದೆ.

ಓಲ್ಡ್‌ಸಿಟಿಯ ನಯಾಕಮಾನ್ ಹಾಗೂ ಮನಿಯಾರ್ ತಾಲೀಮ್‌ನಲ್ಲಿ ಸೀಲ್‌ಡೌನ್‌ ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಸವಾಗಿರುವ 90ಕ್ಕೂ ಹೆಚ್ಚು ಜನರ ವೈದ್ಯಕೀಯ ತಪಾಸಣೆ ನಡೆಸಿ ಎಲ್ಲರನ್ನೂ ನಗರದ ವಸತಿನಿಲಯವೊಂದರಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT