ಅಥಣಿಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ ಅವರು, ‘ಆಗ ತಾನೇ ಎಂಎಲ್ಎ ಚುನಾವಣೆ ಮುಗಿದಿತ್ತು. ಶಾಸಕರಾಗಿ ಆಯ್ಕೆಯಾಗಿ 7–8 ದಿನಗಳೂ ಆಗಿರಲಿಲ್ಲ. ಆಗಲೇ ಬಿಜೆಪಿ ಸೇರುವ ಬಗ್ಗೆ ಮಾತುಕತೆಗಳು ನಡೆದಿದ್ದವು. ಬೆಳಗಾವಿಯಲ್ಲಿ ಸಭೆಯೊಂದು ನಡೆದಿತ್ತು. ಆ ಸಭೆಯಲ್ಲಿ ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ, ವಿವೇಕರಾವ್ ಪಾಟೀಲ, ಮಹಾಂತೇಶ ಕೌಜಲಗಿ ಹಾಗೂ ‘ದೊಡ್ಡ ಮನುಷ್ಯ’ರೊಬ್ಬರು ಇದ್ದರು’ ಎಂದು ಹೇಳಿದರು.