ರಾಮನಗರ: ಬೈಕ್ನಿಂದ ಕೆಳಗೆ ಬಿದ್ದು ಸವಾರ ಸಾವನ್ನಪ್ಪಿದ ಘಟನೆ ಚಾಮುಂಡಿಪುರ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಬಿಳಗುಂಬ ನಿವಾಸಿ ಹೇಮಂತ್ ಅಲಿಯಾಸ್ ರಾಜೇಶ್ವರ (30) ಮೃತರು. ಇವರು ರಾತ್ರಿ ಗೆಳೆಯನ ಜೊತೆಗೂಡಿ ರಾಮನಗರದಿಂದ ಬಿಳಗುಂಬಕ್ಕೆ ವಾಪಸ್ ಆಗುತ್ತಿದ್ದರು. ಈ ಸಂದರ್ಭ ಬೈಕ್ ಸ್ಕಿಡ್ ಆಗಿದ್ದು, ಹಣೆಗೆ ಕಲ್ಲು ತಗುಲಿ ಹೇಮಂತ್ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ.
ರಾಮನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.