ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಮಸೂದೆ ಮಂಡಿಸಿದರು. 1956ರ ಮೊದಲು ಬಾಂಬೆ, ಕೂರ್ಗ್, ಹೈದರಾಬಾದ್, ಮದ್ರಾಸ್ ಹಾಗೂ ಮೈಸೂರು ರಾಜ್ಯಗಳಲ್ಲಿ ಜಾರಿಯಲ್ಲಿದ್ದ ಪ್ರಾದೇಶಿಕ ಕಾನೂನುಗಳು, ಮಹತ್ವವನ್ನು ಕಳೆದುಕೊಂಡಿರುವ ಬೆಳಗಾವಿ ವಿಭಾಗದ 21, ಕೊಡಗು ಪ್ರದೇಶದ 1, ಕಲಬುರ್ಗಿ ಪ್ರದೇಶದ 16, ಮಂಗಳೂರು ಹಾಗೂ ಕೊಳ್ಳೇಗಾಲದ 15 ಮತ್ತು ಮೈಸೂರು ಪ್ರದೇಶದ 7 ಕಾನೂನುಗಳನ್ನು ರದ್ದುಗೊಳಿಸಲು ಪ್ರಸ್ತಾಪಿಸಲಾಗಿದೆ.