ಬೆಂಗಳೂರು: ಬಿಜೆಪಿ ಸದಸ್ಯರು ವಿಧಾನ ಸಭಾಧ್ಯಕ್ಷರ ಪೀಠದ ಎದುರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ಮಧ್ಯೆಯೇ ಪ್ರಮುಖ ಮಸೂದೆಗಳನ್ನು ಮಂಡಿಸಿ, ಯಾವುದೇ ಚರ್ಚೆಇಲ್ಲದೆ ಅಂಗೀಕರಿಸಲಾಯಿತು.
ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಎತ್ತಿನಹೊಳೆ ಯೋಜನೆಯ ಭೂ ಸ್ವಾಧೀನ ಮತ್ತು ಪರಿಹಾರ ಪಾವತಿಗೆ ಸಂಬಂಧ ಪಟ್ಟಂತೆ 2019ನೇ ಸಾಲಿನ ವಿವಿಧ ಎಂಟು ಮಸೂದೆಗಳನ್ನು ಮಂಡಿಸಿದರು.