ಆದರೆ, ಸಭಾಧ್ಯಕ್ಷರ ತೀರ್ಪಿನ ಮೂಲಕ ಸದ್ಯಕ್ಕೆ ಬಿಜೆಪಿ ಬೀಸುದ ದೊಣ್ಣೆಯಿಂದ ತಪ್ಪಿಸಿಕೊಂಡುಬಿಟ್ಟಿದೆ. ನ್ಯಾಯಾಲಯದಿಂದ ಆರು ತಿಂಗಳೊಳಗೆ ತೀರ್ಪು ಹೊರಬೀಳುತ್ತದೆ, ಬಿದ್ದರೂ ಅತೃಪ್ತ ಶಾಸಕರ ಪರವಾಗಿಯೇ ತೀರ್ಪಿರುತ್ತದೆ ಎಂದು ಹೇಳಲಾಗದು. ಹೀಗಾಗಿ ಸದ್ಯ ಬಿಜೆಪಿಗೆ ಅತೃಪ್ತ ಶಾಸಕರ ಹಂಗೇ ಇಲ್ಲದೆ ಸಂಪುಟವನ್ನು ರಚಿಸಿಕೊಳ್ಳಬಹುದು. ತೀರ್ಪು ಬರುವ ತನಕವಾದರೂ ಪಕ್ಷದ ಹಲವು ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಬಳಿಕ ಅದನ್ನು ವಾಪಸ್ ಪಡೆಯಬಹುದು. ಆಗ ಎಲ್ಲರನ್ನೂ ತೃಪ್ತಿಪಡಿಸಿದಂತೆಯೂ ಆದೀತು ಎಂಬ ಚಿಂತನೆಯಲ್ಲಿ ಹಲವು ಬಿಜೆಪಿ ನಾಯಕರಿದ್ದಾರೆ.