‘ಶ್ರೀರಾಮಲು ಅವರಿಗೆ ಸೆಕ್ಷನ್ 371 ಜೆ ಬಗ್ಗೆ ಗೊತ್ತಿಲ್ಲ. ಗೊತ್ತಿರುವುದು 420 ಮಾತ್ರ’ ಎಂದು ಸಿದ್ದರಾಮಯ್ಯ ಮಾಡಿದ ವಾಗ್ದಾಳಿಯನ್ನೇ ಪ್ರತ್ಯಸ್ತ್ರವಾಗಿಸಿ ಬಳ್ಳಾರಿ ಮತ್ತೆ ಗೆಲ್ಲಿಸಿಕೊಳ್ಳಲು ಶ್ರೀರಾಮುಲು ಹೊರಟಿದ್ದಾರೆ. ವಿಧಾನಸೌಧದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಗೈರು, ಪ್ರಶಸ್ತಿ ಸ್ವೀಕರಿಸದೆ ಎಚ್.ಡಿ. ದೇವೇಗೌಡ ಲಂಡನ್ ತೆರಳಿದ ವಿಷಯವನ್ನೇ ಎತ್ತಿಕಟ್ಟಿ, ಸಮ್ಮಿಶ್ರ ಸರ್ಕಾರ ವಾಲ್ಮೀಕಿ ಸಮುದಾಯಕ್ಕೇ ಅವಮಾನ ಎಂದು ಪ್ರಚಾರ ಮಾಡುವ ಮೂಲಕ ಜಾತಿ ಮತಗಳ ಕ್ರೋಡೀಕರಣಕ್ಕೆ ಮುಂದಾಗಿದ್ದಾರೆ.