‘ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದಲ್ಲಿ ಸಂತ್ರಸ್ತರು ಪರಿಹಾರದ ವಿಷಯದಲ್ಲಿ ಪ್ರಶ್ನಿಸಿದರು ನಿಜ. ಆದರೆ, ಸಂತ್ರಸ್ತರಿಗೆ ₹10 ಸಾವಿರ ಕೊಟ್ಟಿದ್ದೇ ಹೆಚ್ಚಾಯಿತು ಎಂದು ನಾನು ಹೇಳಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ನ ಕೆಲವು ಕಾರ್ಯಕರ್ತರು ವಿನಾಕಾರಣ ರಾಜಕಾರಣ ಮಾಡಿದ್ದಾರೆ. ನೆರೆ ವಿಚಾರದಲ್ಲಿ ವಿರೋಧಪಕ್ಷದವರು ಹಾಗೂ ಮಾಧ್ಯಮದವರು ಯಾವುದೇ ಕಾರಣಕ್ಕೂ ರಾಜಕಾರಣ ಮಾಡಬಾರದು’ ಎಂದು ಹೇಳಿದರು.