ಕೇಂದ್ರ ನಾಯಕರ ವಿರುದ್ಧವೇ ಗುಡುಗಿದ, ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಈ ಇಬ್ಬರೂ ಶಾಸಕರು ಬೆಂಗಳೂರಿನಿಂದ ಒಂದೇ ಕಾರಿನಲ್ಲಿ ಮೈಸೂರಿಗೆ ಬಂದು,
ಮುಖ್ಯಮಂತ್ರಿಯನ್ನು ಭೇಟಿಯಾಗಿರುವುದು ‘ಆಪರೇಷನ್ ಕಮಲ’ದಶಂಕೆ ಹುಟ್ಟುಹಾಕಿದೆ. ಆದರೆ,
ಜೆಡಿಎಸ್ ಶಾಸಕರಿಬ್ಬರೂ ಕ್ಷೇತ್ರದ ಅಭಿವೃದ್ಧಿ ವಿಷಯವಾಗಿ ಭೇಟಿ ಮಾಡಿದ್ದಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.