ಸಭೆಯಲ್ಲಿ ರವಿಕುಮಾರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಮಾತನಾಡಲು ಮುಂದಾದಾಗ ಮುಖಂಡರಾದ ಕವಿರಾಜ ಅರಸ್, ಜಡೇಶ್, ರವಿಚಂದ್ರ, ರಾಮಚಂದ್ರಗೌಡ, ವಿನಾಯಕ ಸ್ವಾಮಿ ಮತ್ತಿತರರು ಎದ್ದು ನಿಂತು, ‘ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಬಗ್ಗೆ ನೀವೇನೂ ನಮಗೆ ಹೇಳಬೇಕಿಲ್ಲ. ನಮಗೆ ಎಲ್ಲವೂ ಗೊತ್ತು. ವಿಜಯನಗರ ಕ್ಷೇತ್ರದ ಟಿಕೆಟ್ ಬಗ್ಗೆ ಮಾತಾಡಿ’ ಎಂದು ಪಟ್ಟು ಹಿಡಿದರು. ಆಗ ಸಭೆಯಲ್ಲಿದ್ದ ಕಾರ್ಯಕರ್ತರೆಲ್ಲರೂ ಚಪ್ಪಾಳೆ ಹೊಡೆದು ಅವರಿಗೆ ಬೆಂಬಲ ಸೂಚಿಸಿದರು.