ಮೊದಲ ಎರಡು ದಿನ ಅವರು ಕಲಾಪಕ್ಕೆ ಬಂದಿರಲಿಲ್ಲ. ಬಜೆಟ್ ಮಂಡನೆಯ ವೇಳೆಯೂ ಹಾಜರಿರಲಿಲ್ಲ. ಪಾಟೀಲ ಅತೃಪ್ತ ಶಾಸಕರ ಜತೆಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಪಾಟೀಲ ಅವರು ಶನಿವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ‘ಕ್ಷೇತ್ರಕ್ಕೆ ಸಮರ್ಪಕ ಅನುದಾನ ಸಿಕ್ಕಿಲ್ಲ. ಹೀಗಾಗಿ, ಅಸಮಾಧಾನ ಇದೆ. ಆದರೆ, ಕಾಂಗ್ರೆಸ್ ತೊರೆಯುವುದಿಲ್ಲ’ ಎಂದು ಬಿ.ಸಿ.ಪಾಟೀಲ ಸೋಮವಾರವೂ ಪುನರುಚ್ಚರಿಸಿದರು.