ಶನಿವಾರ ಇಲ್ಲಿ ನಡೆದ ಸಂಸದರು ಹಾಗೂ ಪಕ್ಷದ ಮುಖಂಡರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಿ.ಎಸ್.ಯಡಿಯೂರಪ್ಪ ಅವರು ಶೋಲೆ ಚಿತ್ರದ ಬಲದೇವ್ಸಿಂಗ್ ಠಾಕೂರ್ ಇದ್ದ ಹಾಗೆ. ನಾನು ಅಮಿತಾಬ್ ಬಚ್ಚನ್, ಬಾಬುರಾವ ಚಿಂಚನಸೂರ ಧರ್ಮೇಂದ್ರನ ಪಾತ್ರಧಾರಿ. ಗಬ್ಬರ್ಸಿಂಗ್ನಂತೆ ಸೊಕ್ಕಿನಿಂದ ಮೆರೆಯುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉರುಳಿಸುವಲ್ಲಿ ನಾವು ಗೆದ್ದಿದ್ದೇವೆ’ ಎಂದು ಹೋಲಿಕೆ ಮಾಡಿದರು.