ಇದಕ್ಕೂ ಮೊದಲು, ಜಿಂದಾಲ್, ಬರ, ಸಾಲ ಮನ್ನಾ ಕುರಿತು ಚರ್ಚೆಗೆ ಬರುವಂತೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದ್ದರು. ಈ ಬಗ್ಗೆ ಶನಿವಾರ ರಾತ್ರಿಯೇ ಟ್ವೀಟ್ ಮಾಡಿದ್ದ ಸಿಎಂ, ಭಾನುವಾರ ಬೆಳಗ್ಗೆ ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದಿದ್ದರು. ಇದ್ಯಾವುದನ್ನೂ ಪರಿಗಣಿಸಿದ ಬಿಜೆಪಿ ನಾಯಕರು ಹೋರಾಟ ಮುಂದುವರಿಸಿದರು.