ರಾಜೀನಾಮೆ ಸ್ವೀಕರಿಸಿ ಪ್ರಕರಣವನ್ನು ಇವತ್ತೇ ಇತ್ಯರ್ಥ ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ, ತೀರ್ಮಾನ ತೆಗೆದುಕೊಂಡಿಲ್ಲ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದರು. ಆದೇಶವನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿ ವ್ಯಂಗ್ಯವಾಡಿದ್ದಾರೆ. ರಾಜೀನಾಮೆ ಸರಿ ಇದೆಯೊ ಇಲ್ಲವೊ ಗಮನಿಸುವುದು ಅವರ ಕೆಲಸ. ಅದನ್ನು ಗಂಭೀರವಾಗಿ ಮಾಡಿದಂತಿಲ್ಲ ಎಂದು ರವಿಕುಮಾರ್ ತಿಳಿಸಿದರು.