ಬಳಿಕ ಮಾತನಾಡಿದ ಕವಿರಾಜ ಅರಸ್, 'ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ. ಪಕ್ಷವು ಪಕ್ಷಾಂತರಿ ಆನಂದ್ ಸಿಂಗ್ಗೆ ಮಣೆ ಹಾಕಿ ಮೂಲ, ನಿಷ್ಠಾವಂತರಿಗೆ ಅನ್ಯಾಯ ಮಾಡಿದೆ. ಬೆಂಬಲಿಗರು, ಕಾರ್ಯಕರ್ತರ ಅಭಿಲಾಷೆಯಂತೆ ಚುನಾವಣೆಗೆ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿರುವೆ. ಜಯದ ಭರವಸೆ ಇದೆ. ಯಾವ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ' ಎಂದು ತಿಳಿಸಿದರು.