‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ತಾಜ್ ಹೋಟೆಲ್ಗೆ ಮಾ. 4ರಂದು ನನ್ನನ್ನು ಕರೆಸಿದ್ದ ಆರೋಪಿಗಳು, ದೂರು ದಾಖಲಿಸಬಾರದೆಂದರೆ ₹ 3 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ನಾನು ಒಪ್ಪಿರಲಿಲ್ಲ. ಮಾ. 6ರಂದು ಎರಡನೇ ಬಾರಿ ನನ್ನನ್ನು ಭೇಟಿ ಆಗಿದ್ದ ಆರೋಪಿಗಳು, ಪುನಃ ಹಣ ನೀಡುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾರೆ’ ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ.