ಬಾಗಲಕೋಟೆ: ಕಾಶ್ಮೀರದಲ್ಲಿ ಬುಧವಾರ ನಸುಕಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಬಾಗಲಕೋಟೆ ತಾಲ್ಲೂಕಿನ ಇಲಾಳ ಗ್ರಾಮದ ಯೋಧ ಶ್ರೀಶೈಲ ಬಳಬಟ್ಟಿ (34) ಮೃತಪಟ್ಟಿದ್ದಾರೆ.
ರಾಯಪ್ಪ ಬಳಬಟ್ಟಿ, ಮಹಾದೇವಿ ಅವರ ಪುತ್ರರಾದ ಇವರು, 2006ರಿಂದ 12ನೇ ಮದ್ರಾಸ್ ರೆಜಿಮೆಂಟ್ನ ಯೋಧರಾಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದಷ್ಟೇ ಜಮ್ಮು–ಕಾಶ್ಮಿರಕ್ಕೆ ನಿಯೋಜನೆಗೊಂಡಿದ್ದರು.
ಶ್ರೀಶೈಲ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.