ಕೆಲವರ ನೇಮಕಕ್ಕೆ ತಕರಾರು: ಈಗಾಗಲೇ ನಿಗಮ– ಮಂಡಳಿಗಳಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವು ವ್ಯಕ್ತಿಗಳ ಬಗ್ಗೆ ಸಂಘ ಪರಿವಾರದಲ್ಲೇ ಒಮ್ಮತ ಅಭಿಪ್ರಾಯವಿಲ್ಲ. ಈ ಹಿಂದೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರನ್ನೇ ಮತ್ತೆ ಅದೇ ಸಂಸ್ಥೆಗಳಿಗೆ ನೇಮಕ ಮಾಡಲಾಗಿದೆ. ಪದೇ ಪದೇ ಅವರನ್ನೇ ನೇಮಕ ಮಾಡುವ ಔಚಿತ್ಯವೇನು, ಹೊಸಬರಿಗೆ ಅವಕಾಶ ನೀಡಬಹುದಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿದೆ.