ಬಂಡಾಯ ಸಾಹಿತ್ಯ ಸಂವಾದದಲ್ಲಿ ಮಾತನಾಡಿದ ಅವರು, ‘ತಲಾಖ್ ಪಡೆಯುವ ಮುಸ್ಲಿಂ ಮಹಿಳೆಗೆ ಮರು ವಿವಾಹವಾಗುವ ಅವಕಾಶ ಸುಲಭವಾಗಿ ಸಿಗುತ್ತಿತ್ತು. ವಿಚ್ಛೇದನ ಕೋರಿ ಮತ್ತೆ ನ್ಯಾಯಾಲಯಕ್ಕೆ ಅಲೆಯುವ ಅಗತ್ಯ ಇರಲಿಲ್ಲ. ತ್ರಿವಳಿ ತಲಾಖ್ ನಿಷೇಧದಿಂದ ಈ ಅವಕಾಶವೊಂದು ತಪ್ಪಿಹೋಗಿದೆ. ಈ ಕುರಿತು ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.