ಹುಟ್ಟೂರಿನಲ್ಲಿ ಸಂಭ್ರಮ: ಬೂಕನಕೆರೆ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನೆಲೆಸಿತ್ತು. ಗ್ರಾಮಸ್ಥರು ತಳಿರು, ತೋರಣ ಕಟ್ಟಿ ಊರಿನ ಮಗನಿಗೆ ಸ್ವಾಗತ ಕೋರಿದರು. ಮೊದಲು, ಮನೆ ದೇವರು ಸ್ವತಂತ್ರ ಸಿದ್ಧಲಿಂಗೇಶ್ವರ ಗದ್ದುಗೆಯ ದರ್ಶನ ಪಡೆದ ಯಡಿಯೂರಪ್ಪ, ನಂತರ ಗ್ರಾಮದೇವತೆ ಗೋಗಾಲಮ್ಮದೇವಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.