ಸಿಂಗಾಪುರ ಹಾಗೂ ತೊಡರನಾಳು ಗ್ರಾಮದ ಗಡಿಯಲ್ಲಿರುವ ಗೋಮಾಳವನ್ನು ಶಿವಣ್ಣ ಎಂಬುವರು 8 ವರ್ಷಗಳಿಂದ ಉಳುಮೆ ಮಾಡುತ್ತಿದ್ದರು. ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳ ಬೆಳೆಯುತ್ತಿದ್ದರು. 2018ರ ಬೇಸಿಗೆಯಲ್ಲಿ ಪಕ್ಕದ ತೋಟದ ಕೃಷಿಕರೊಬ್ಬರು ಕೊಳವೆಬಾವಿ ಕೊರೆಸಿದರು. ನಿರೀಕ್ಷೆಗೂ ಮೀರಿ ನೀರು ಸಿಕ್ಕಿದ್ದು ಗ್ರಾಮಸ್ಥರ ಗಮನ ಸೆಳೆಯಿತು. ಬೇಸಿಗೆಗೂ ಮುನ್ನವೇ ನೀರಿಗೆ ಹಾಹಾಕಾರ ಆಗಿದ್ದು, ಅದನ್ನು ನೀಗಿಸಿಕೊಳ್ಳಲು ರೈತರು ಗೋಮಾಳದ ಮೊರೆಹೋಗಿದ್ದಾರೆ.