ಉಡುಪಿ: ಉಡುಪಿಯ ಶ್ರೀಕೃಷ್ಣಮಠದಲ್ಲಿ ಭಾನುವಾರ ಬ್ರಹ್ಮಕಲಶೋತ್ಸವ ನೆರವೇರಿತು. ಅಷ್ಟಮಠಗಳ ಯತಿಗಳು ಕೃಷ್ಣನಿಗೆ 108 ರಜತ ಕಲಶಗಳಿಂದ ಅಭಿಷೇಕ ಮಾಡಿದರು. ಸಾವಿರಾರು ಭಕ್ತರು ಸಂಭ್ರಮದ ಕ್ಷಣವನ್ನು ಕಣ್ತುಂಬಿಕೊಂಡರು.
ಬೆಳಗಿನ ಜಾವ ಕೃಷ್ಣನಿಗೆ ನೈರ್ಮಾಲ್ಯ ವಿಸರ್ಜನೆ ಪೂಜೆ ನೆರವೇರಿತು. ಬಳಿಕ ಮಠಾಧೀಶರು ಕೃಷ್ಣನ ಗರ್ಭಗುಡಿಯ ಎದುರು ಕಲಶಗಳನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು. ಬಳಿಕ ವೇದ–ಘೋಷಗಳ ನಡುವೆ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದ ಕೃಷ್ಣನಿಗೆ ಯತಿಗಳು ಬ್ರಹ್ಮಕಲಶಾಭಿಷೇಕ ನೆರವೇರಿಸಿದರು.