‘ಸುಪ್ರೀಂಕೋರ್ಟ್ನಲ್ಲಿ ಆದ ವಾದ–ಪ್ರತಿವಾದಗಳು ನಿಮಗೂ ಗೊತ್ತಿರಬಹುದು. ಮುಂಬೈನಲ್ಲಿರುವ 10 ಮಂದಿ ಅತೃಪ್ತರ ಜೊತೆಗೆ ಹೊಸದಾಗಿ ಐವರು ಸುಪ್ರೀಂಕೋರ್ಟ್ಗೆ ಮನವಿ ಮಾಡಿಕೊಂಡಿದ್ದಾರೆ. ಇವರ ಮನವಿಗಳನ್ನು ನ್ಯಾಯಾಲಯ ಸ್ವೀಕರಿಸಿದೆ. ಈ ಹಂತದಲ್ಲಿ ಯಾರೂ ಹಿಂದೆ ಸರಿಯಲು ಆಗುವುದಿಲ್ಲ. ಬೆಳಿಗ್ಗೆಯಿಂದ ಶಿವಕುಮಾರ್ ಮತ್ತು ಇತರರ ಒತ್ತಡದಿಂದ ಎಂಟಿಬಿ ನಾಗರಾಜ್ ಏನೋ ಹೇಳಿರಬಹುದು. ಆದರೆ ಕೋರ್ಟ್ಗೆ ಮನವಿ ಸಲ್ಲಿಸಿರುವವರಲ್ಲಿ ಅವರೂ ಸೇರಿದ್ದಾರೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು’ ಎಂದರು.