ಇಡೀ ದೇಶ ಅಚ್ಚರಿ ಪಡುವ ರೀತಿಯಲ್ಲಿ ನೆರೆಪೀಡಿತರಿಗೆ ಒಂದೊಂದು ಎಕರೆಗೆ ₹ 10 ಸಾವಿರದಂತೆ ಪರಿಹಾರ ನೀಡುತ್ತಿದ್ದೇವೆ. ಮನೆ ಕಟ್ಟಲು ₹ 90–95 ಸಾವಿರ ನೀಡುವಲ್ಲಿ ₹ 5 ಲಕ್ಷ ಪರಿಹಾರ ನೀಡುತ್ತಿದ್ದೇವೆ. ಬಾಡಿಗೆ ಕಟ್ಟಲು ₹ 5,000ದಂತೆ 9 ತಿಂಗಳಿಗೆ ನೀಡುತ್ತಿದ್ದೇವೆ. ಶೆಡ್ಗಳನ್ನು ಮಾಡಿಸಿಕೊಡುತ್ತಿದ್ದೇವೆ. ಇಷ್ಟಿದ್ದರೂ ತೃಪ್ತಿ ಇಲ್ಲವೆಂದರೆ? ತೊಂದರೆಯಾದ 24 ಗಂಟೆಗಳಲ್ಲಿ ಬಟ್ಟೆಬರೆ ತೆಗೆದುಕೊಳ್ಳಲು ಪ್ರತಿಯೊಬ್ಬರಿಗೂ ₹ 10 ಸಾವಿರದಂತೆ ನೀಡಲಾಗಿದೆ. ಯಾರು ಮಾಡಿದ್ದಾರೆ ಇಷ್ಟು ಕೆಲಸ, ಒಂದು ಉದಾಹರಣೆ ಕೊಡಿ ಎಂದು ಯಡಿಯೂರಪ್ಪ ಹೇಳಿದರು.