ಶ್ರೀರಂಗಪಟ್ಟಣ: ಸಮೀಪದ ಗಂಜಾಂನಲ್ಲಿರುವ ಟಿಪ್ಪು ಸಮಾಧಿ ಸ್ಥಳ ಗುಂಬಸ್ಗೆ 2012ರ ಡಿ. 13ರಂದು ಭೇಟಿ ನೀಡಿದ್ದ ಬಿ.ಎಸ್.ಯಡಿಯೂರಪ್ಪ, ಸಂದರ್ಶಕರ ಪುಸ್ತಕದಲ್ಲಿ ಟಿಪ್ಪುಸುಲ್ತಾನ್ನನ್ನು ಹೊಗಳಿ ಬರೆದ ಟಿಪ್ಪಣಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ನಮ್ಮ ಮಾತೃಭೂಮಿ ಭಾರತವನ್ನು ರಕ್ಷಿಸಲು ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ವೀರ ಟಿಪ್ಪುಸುಲ್ತಾನ್’ ಎಂದು ಅವರು ಬರೆದಿದ್ದಾರೆ.
ಟಿಪ್ಪುಸುಲ್ತಾನ್ ಜಯಂತಿ ಸ್ಥಗಿತ, ಟಿಪ್ಪು ಕುರಿತ ಪಠ್ಯ ತೆಗೆದು ಹಾಕುವ ನಿರ್ಧಾರ ಕೈಗೊಂಡಿರುವ ಈ ಸಮಯದಲ್ಲಿ ಆ ಟಿಪ್ಪಣಿ ಮಹತ್ವ ಪಡೆದಿದೆ.