ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಗುತ್ತಿಗೆ ನೌಕರರೊಬ್ಬರು, ‘ನಮಗೆ ಸೆ.15ರಂದು ಕೊನೆಯ ಬಾರಿಗೆ ವೇತನ ನೀಡಲಾಗಿದೆ. ಈಗ ನೌಕರರು ತಮ್ಮ ದೈನಂದಿನ ಖರ್ಚಿಗೆ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ರಾಜ್ಯದ ವಿವಿಧೆಡೆ ಇದೇ ಪರಿಸ್ಥಿತಿಯಿದ್ದು, ದೂರಸಂಪರ್ಕ ಇಲಾಖೆ ಸಚಿವಾಲಯವು ಕೂಡಲೇ ಮಧ್ಯಪ್ರವೇಶಿಸಿ ವೇತನ ಕೊಡಿಸಬೇಕು’ ಎಂದು ಒತ್ತಾಯಿಸಿದರು.