ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಪಟ್ಟಿ ಭಾಗ್ಯ ಎಂದು?

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬ ಒಳ್ಳೆಯ ಉದ್ದೇಶದಿಂದ ಪ್ರಾರಂಭವಾದ ‘ಮುಕ್ತ ಗಂಗೋತ್ರಿ’ ಇಂದು ಸಮಸ್ಯೆಗಳ ಆಗರವಾಗಿದೆ.

ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಲವು ವಿದ್ಯಾರ್ಥಿಗಳಿಗೆ ವರ್ಷಗಳೇ ಕಳೆದರೂ ಅಂಕಪಟ್ಟಿಯನ್ನು ನೀಡದೆ ಇಲ್ಲಿನ ಅಧಿಕಾರಿಗಳು ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ವಿಶ್ವವಿದ್ಯಾಲಯಕ್ಕೆ ಖುದ್ದಾಗಿ ಹೋಗಿ ಅಂಕಪಟ್ಟಿ ನೀಡುವಂತೆ ಕೇಳಿದರೆ, ‘ಇನ್ನು ಹದಿನೈದು ದಿನಗಳೊಳಗೆ ಕಳಿಸಿಕೊಡುತ್ತೇವೆ’ ಎಂದು ಭರವಸೆ ಕೊಡುತ್ತಾರೆ.

ಅಂಕಪಟ್ಟಿಗೆ ಕಾದು ಕಾದು ಸುಸ್ತಾದ ವಿದ್ಯಾರ್ಥಿ ಕರೆ ಮಾಡಿ ವಿಚಾರಿಸಿದರೆ ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ. ಹಲವು ಕನಸುಗಳನ್ನು ಹೊತ್ತು ಪಡೆದ ಪದವಿಗೆ ಅಂಕಪಟ್ಟಿ ಸಿಗದೆ, ವಿದ್ಯಾರ್ಥಿಗಳು ಉದ್ಯೋಗಾವಕಾಶಗಳಿಂದ ವಂಚಿತರಾಗಬೇಕಾಗಿದೆ.

ವಿಶ್ವವಿದ್ಯಾಲಯದ ಕುಲಪತಿ ಈ ಸಮಸ್ಯೆಯತ್ತ ಗಮನಹರಿಸಿ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಅಂಕಪಟ್ಟಿ ದೊರೆಯುವಂತೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT