ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನಲ್ಲಿಯೂ ತಂಪೆರೆದ ಪುಸ್ತಕದ ಕಂಪು

Last Updated 2 ಫೆಬ್ರುವರಿ 2018, 7:09 IST
ಅಕ್ಷರ ಗಾತ್ರ

ತುಮಕೂರು: ಅತ್ಯಂತ ಅಪರೂಪವಾಗಿರುವ ಅಮೂಲ್ಯ ಪುಸ್ತಕಗಳು ಹಾಗೂ ಕನ್ನಡ ಸಾಹಿತ್ಯ ಭಂಡಾರವು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಪುಸ್ತಕ ಮಳಿಗೆಯಲ್ಲಿ ಕಂಡು ಬಂದಿದ್ದು, ಸಾಹಿತ್ಯಾಸಕ್ತರು ಪುಸ್ತಕ ಕೊಳ್ಳಲು ಮುಗಿಬಿದ್ದಿದ್ದರು.

ಸಮ್ಮೇಳನದಲ್ಲಿ ಸುಮಾರು 20ಕ್ಕೂ ಹೆಚ್ಚು ಪುಸ್ತಕ ಮಳಿಗೆ ತೆರೆಯಲಾಗಿತ್ತು. ಮಳಿಗೆ ಕೌಂಟರ್‌ಗಳ ಕಡೆಗೆ ಯಾರನ್ನೂ ಕರೆಯುವುದೇ ಬೇಕಾಗಿರಲಿಲ್ಲ. ಸಮ್ಮೇಳನಕ್ಕೆ ಬಂದ ಸಾಹಿತ್ಯಾಸಕ್ತರು ಗಾಜಿನ ಮನೆಯಲ್ಲಿನ ಪುಸ್ತಕಮನೆಗಳಿಗೆ ಲಗ್ಗೆ ಹಾಕಿ ಪುಸ್ತಕ ಖರೀದಿಸಿದರು. ಬಿಸಿಲಿನಲ್ಲಿಯೂ ಕನ್ನಡ ಪುಸ್ತಕದ ಕಂಪು ತಂಪೆರೆಯಿತು.

ಪುಸ್ತಕ ಮಾರಾಟ ಮಳಿಗೆಯಲ್ಲಿ ಪರಿಷತ್ತು ಪ್ರಕಟಿಸುವ ಎಲ್ಲ ಪುಸ್ತಕಗಳಿಗೂ ರಿಯಾಯಿತಿ ಇತ್ತು. ಇದಲ್ಲದೆ ಸಮ್ಮೇಳನಗಳ ಸಂದರ್ಭದಲ್ಲಿ ಇತರೆ ಲೇಖಕ ಪ್ರಕಾಶಕರ ಪುಸ್ತಕಗಳ ಮಾರಾಟಕ್ಕೆ ಪರಿಷತ್ತು ವ್ಯವಸ್ಥೆ ಕಲ್ಪಿಸಿದ್ದು ವಿಶೇಷವಾಗಿತ್ತು.

‘26 ವರ್ಷದಿಂದ ಎಲ್ಲ ಸಮ್ಮೇಳನದಲ್ಲಿ ಭಾಗವಹಿಸಿದ್ದೇನೆ. ಹೋಬಳಿಯಿಂದ ಹಿಡಿದು ಅಖಿಲ ಕರ್ನಾಟಕ ಸಮ್ಮೇಳನದಲ್ಲಿ ಭಾಗುವಹಿಸಿದ್ದೇನೆ. ಕನ್ನಡ ಕಂಪು ಹರಡಬೇಕು, ಎಲ್ಲೆಡೆ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡಬೇಕು ಎನ್ನುವುದು ನಮ್ಮ ಆಶಯವಾಗಿದೆ’ ಎಂದು ಪುಸ್ತಕ ವ್ಯಾಪಾರಿ ನಟರಾಜ್‌ ಅಭಿಪ್ರಾಯಪಟ್ಟರು.

ಬದಲಾದ ಸನ್ನಿವೇಶದಲ್ಲಿ ಕನ್ನಡ ಓದುಗ ಕಳೆದುಹೋಗುತ್ತಿದ್ದಾನೆ. ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿರುವ ಪುಸ್ತಕ ಮಾರಾಟದ ಪ್ರಮಾಣ‌ ಕಡಿಮೆಯಾಗುತ್ತಿದೆ. ಇದು ಬದಲಾಗಬೇಕು ಎಂದು ವ್ಯಾಪಾರಿ ಮೋಹನ್‌ ವಿಷಾದ ವ್ಯಕ್ತಪಡಿಸಿದರು.

ಪುಸ್ತಕ ಸಂತೆಯ ಆಕರ್ಷಣೆ

ಸಾಹಿತ್ಯಸಕ್ತರಿಗಾಗಿ ವಿಶೇಷ ದರದಲ್ಲಿ ₹ 10 ಮತ್ತ ₹ 20 ಬೆಲೆಯ ಪುಸ್ತಕ ಸಂತೆ ಸಮ್ಮೇಳನದಲ್ಲಿ ಪ್ರಮುಖವಾಗಿ ಆಕರ್ಷಿಸಿತು. ಕಲೆ ಸಾಹಿತ್ಯ ಸಂಸ್ಕೃತಿ, ವಿಜ್ಞಾನ, ಕೃಷಿ ಚಟುವಟಿಕೆ ಕುರಿತ ಎಲ್ಲ ಕ್ಷೇತ್ರದ ಪುಸ್ತಕಗಳು ಇದರಲ್ಲಿದ್ದವು. ಪುಸ್ತಕ ಪ್ರೇಮಿಗಳು ಕೊಂಡುಕೊಳ್ಳಲು ಮುಂದಾಗಿದ್ದು ವಿಶೇಷವಾಗಿತ್ತು.

* * 

ಇಲ್ಲಿಯ ತನಕ ಗಮನಿಸಿದಂತೆ <br/>ಹೊಸ ಹೋರಾಟ ಹಾಗೂ <br/>ಸಾಮಾಜಿಕ ಹೋರಾಟಗಳ ಪುಸ್ತಕಗಳಿಗೆ ಬೇಡಿಕೆ ಹೆಚ್ಚಿವೆ
ಮಾದಪ್ಪ, ಪುಸ್ತಕ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT