ಮುಖ್ಯಮಂತ್ರಿಯವರ ಈ ನಿರ್ಧಾರದಿಂದಾಗಿ ರೈತರಿಗೆ ಒಟ್ಟಾರೆ ₹ 34,000 ಕೋಟಿ ಮೊತ್ತದ ಪ್ರಯೋಜನ ಲಭ್ಯವಾಗಲಿದೆ. ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿದ ಹಾಗೂ ಸುಸ್ತಿದಾರರಲ್ಲದ ರೈತರಿಗೆ ಉತ್ತೇಜನಕಾರಿಯಾಗಿ ಮರುಪಾವತಿ ಮಾಡಿದ ಸಾಲದ ಮೊತ್ತ ಇಲ್ಲವೆ ₹ 25 ಸಾವಿರ, ಇದರಲ್ಲಿ ಯಾವುದು ಕಡಿಮೆಯೋ ಅದನ್ನು ರೈತರ ಖಾತೆಗಳಿಗೆ ಜಮೆ ಮಾಡುವುದಾಗಿ ಅವರು ಪ್ರಕಟಿಸಿದ್ದಾರೆ.