ಪಾಂಡವಪುರ ತಾಲ್ಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ 2010ರ ಡಿಸೆಂಬರ್ 12ರಂದು ವಿವಾಹ ಸಮಾರಂಭ ನಡೆದಿತ್ತು. ಎರಡು ದಿನಗಳ ಬಳಿಕ ಡಿ. 14ರಂದು ವರನ ಊರು ನಂಜನಗೂಡಿನಲ್ಲಿ ಬೀಗರ ಔತಣಕೂಟ ಏರ್ಪಡಿಸಲಾಗಿತ್ತು. ಔತಣಕೂಟದಲ್ಲಿ ಪಾಲ್ಗೊಂಡ ವಧುವಿನ ಕುಟುಂಬದವರು ಮತ್ತು ಸಂಬಂಧಿಕರು ಮೂರು ವಾಹನಗಳಲ್ಲಿ ಅರಳುಕುಪ್ಪೆಗೆ ವಾಪಸಾಗುತ್ತಿದ್ದರು. ವಧು–ವರರು ಕಾರಿನಲ್ಲಿದ್ದರೆ, ಏಳೆಂಟು ಪುರುಷರು ಗೂಡ್ಸ್ ಆಟೊದಲ್ಲಿದ್ದರು. ಮ್ಯಾಕ್ಸಿಕ್ಯಾಬ್ನಲ್ಲಿ ಸುಮಾರು 40 ಮಂದಿ ಇದ್ದರು. ಮ್ಯಾಕ್ಸಿಕ್ಯಾಬ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಉಂಡಬತ್ತಿ ಕೆರೆಗೆ ಉರುಳಿತ್ತು. 26 ಮಹಿಳೆಯರು 4 ಮಕ್ಕಳು ಮತ್ತು ಒಬ್ಬ ಪುರುಷ ಜಲಸಮಾಧಿಯಾಗಿದ್ದರು.