‘ಮೇರಿ ಮಾತು ನಂಬಿದ್ದ ದೂರುದಾರ, ಇದೇ 12ರಂದು ಮಧ್ಯಾಹ್ನ ಆಕೆಯ ಮನೆಗೆ ಹೋಗಿದ್ದರು. ಅವರನ್ನು ಬರಮಾಡಿಕೊಂಡಿದ್ದ ಮೇರಿ, ಮನೆಯ ಕೊಠಡಿಯೊಂದಕ್ಕೆ ಕರೆದೊಯ್ದು ಬಾಗಿಲು ಹಾಕಿಕೊಂಡಿದ್ದಳು. ಅದಾಗಿ ಕೆಲವೇ ಹೊತ್ತಿನಲ್ಲಿ ಕೊಠಡಿಯೊಳಗೆ ನುಗ್ಗಿದ್ದ ವಿಜಯ್ ಹಾಗೂ ಅರುಣ್, ‘ಸಂಸಾರಸ್ಥರ ಮನೆಗೆ ಬಂದು ಈ ರೀತಿ ಮಾಡುತ್ತಿದ್ದಿಯಾ. ನಿನಗೆ ಒಂದು ಗತಿ ಕಾಣಿಸುತ್ತೇವೆ. ನಿನ್ನ ಮರ್ಯಾದೆಯನ್ನೂ ತೆಗೆಯುತ್ತೇವೆ’ ಎಂದು ಹೇಳಿ ಜಗಳ ತೆಗೆದಿದ್ದರು.’