ಶಿರಾ: ತಾಲ್ಲೂಕು ಹೊನ್ನೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಭಾನುವಾರ ಕಾರು ಉರುಳಿ ಬಿದ್ದು ಮೂರು ಮಂದಿ ಮೃತಪಟ್ಟಿದ್ದಾರೆ.
ಬರಗೂರಿನ ಬಸವರಾಜು (27), ವಿನಯ್ (28) ಹಾಗೂ ಶಿರಾ ಲಕ್ಷ್ಮಿನಗರದ ಸುಮನ್ಬಾಬು (26) ಮೃತರು. ಇವರು ಮರಡಿಗುಡ್ಡ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿ ಬುಕ್ಕಾಪಟ್ಟಣ ಕಡೆಯಿಂದ ಶಿರಾಕ್ಕೆ ಬರುತ್ತಿರುವಾಗ ಹೊನ್ನೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾರು, ಚಾಲಕನ ನಿಯಂತ್ರಣಕ್ಕೆ ಸಿಗದೆ ಉರುಳಿ ಬಿದ್ದಿದೆ.
ಚಾಲಕ ಸಚಿನ್ ಹಾಗೂ ನೂತನ ಬಾಬು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.